ಗೂಸಬಮ್ಸ ನಿರೀಕ್ಷೆಯಲ್ಲಿ

ಕಡಲ ತಡಿಯಲ್ಲಿ ನಿಂತು
ವಿರುದ್ಧ ಮುಖವಾಗಿ
ಚಿತ್ತೈಸಿದರೆ ಎಂಥ ಸಹಜತೆ
ಲ್ಯಾಂಡಸ್ಕೇಪ್ ಮಾಡಿದ
ಮಹಾನ್ ತೋಟಗಾರನೊಬ್ಬ
ಅಂಚಂಚನ್ನು ಬಿಡದೆ
ಕಲೆಯ ಗ್ಯಾಲರಿಯನ್ನೆ ಇಳಿಬಿಟ್ಟ ಹಾಗೆ.
ನೋಡುತ್ತ ಮೈಮೇಲೆ
ಗೂಸಬಮ್ಸಗಾಗಿ ಕಾದೆ.

ಗಗನ ಚುಂಬಿ ಕಟ್ಟಡದ
ಏರುವ ಇಳಿಯುವ
ಎಸ್ಕಲೇಟರಗಳ ಮೇಲೆ
ಕಿರು ಸೊಂಟದ
ಏಳು ಮಲ್ಲಿಗೆ ತೂಕದ ಹೆಣ್ಣುಗಳನ್ನು
ಧಡೂತಿ ತೊಡೆಗಳ ಇಳಿಬಿದ್ದ ಸ್ತನಗಳ ಭಾರ
ಜೀವ ಹೊತ್ತ ಗಜಗಾಮಿನಿಯರನ್ನು
ಕಂಡು ಅರೆರೆ.. ಎಂದುಕೊಳ್ಳುತ್ತ
ಮೈ ರೋಮ ನಿಮಿರಿತೇ?
ಕಾಣದೇ ವ್ಯಗ್ರಗೊಂಡೆ.

ಮೆಟ್ರೋ ಸಿಟಿಗಳಲ್ಲಿಯ ರಸ್ತೆಗಳಲ್ಲಿ
ಸೂಟುಬೂಟು ಹಾಕಿದ
ಮಿಂಚು ಕಂಗಳ
ಸುಂದರಾಂಗರ ಕಣ್ಣಿನ ಸಂಚಲನೆಗೆ
ಕೆತ್ತಿಸಿಕೊಂಡ ಮುಖಗಳ ಮಾದಕತೆಗೆ ಇದ್ದ
ಸೆಳೆತಕ್ಕೆ ಮನಸ್ಸು ಜೋಲಿ ಹೊಡೆದು
ಕೈ ನೋಡಿದರೆ
ರೋಮಾಂಚನ ವ್ಯಾಕ್ಸಾಯನ.

ಹೆತ್ತವರ ಶ್ರಾದ್ದಕ್ಕೆ ಪಿಂಡ ಬಿಡುವಾಗಲೆಲ್ಲಾ
ನೆನಪುಕ್ಕಿ ಕಣ್ಣೀರಾಗುತ್ತಿದ್ದಾಗಲೆಲ್ಲಾ
ನನ್ನಪ್ಪನ ಮೈಮೇಲಿನ ಕರಿಕಪ್ಪುರೋಮ
ನಿಮಿರಕೊಳ್ಳುತ್ತ ಅದ ನೋಡುತ್ತ
ಎದೆಯಲ್ಲಾಡುವ ಅಂಜಿಕೆಯ ಕಪ್ಪೆ
ನನ್ನಪ್ಪನ ಶ್ರಾದ್ಧದ ಹೆಸರಿನಲ್ಲಿ ಗಡದ್ದಾಗಿ ತಿಂದು
ಬರುವ ನನಗೆ ಪ್ರತಿವರ್ಷವೂ
ಮೈ ರೋಮ ನೆಟ್ಟಗಾಗಲಿಲ್ಲವೆಂದು ಖುಷಿ.

ಸಂಜೆ ಗೋಧೂಳಿ ಹೊತ್ತು
ಗದ್ದೆ ಬದುವಿಗೆ ಕೂತ ಪೆಡ್ಡೆ ಹೈಕಳು
ಬಾಲನೆಗರಿಸಿ ಓಡುತ್ತ ಬರುವ
ಕರುಗಳ ಕಂಡು
ಕುಂಡೇ ಹರಿದ ಚಡ್ಡಿಯಲ್ಲಿಯೇ
ರಿಲೇ ಓಡುತ್ತಾ ಗೂಸಬಮ್ಸ ಆವಾಹಿಸಿಕೊಳ್ಳತ್ತಿದ್ದಾರೆ.
ಹುಡಿ ಎದ್ದ ಮಣ್ಣಿಗೆ ತಟ್ಟನೆ ಬಿದ್ದ
ಒಂದೆರಡು ಮಳೆಹನಿಗಳ ಆಘ್ರಾಣಿಸುತ್ತಾ
ಎದ್ದ ರೋಮದ ಲೆಕ್ಕಾಚಾರ ಮಾಡುತ್ತಿದ್ದಾರೆ
ಇಲ್ಲಿ ಪಟ್ಟಣಗಳಲ್ಲಿ
ಸಂಜೆಯಾಗುತ್ತದೆ ಅಷ್ಟೇ
ರೋಮ ಸೆಟೆದುಕೊಳ್ಳುವುದಿಲ್ಲ.

ಹೂವಿನ ದಳಗಳ ಮುಗುಳು
ಮೈಸೋಕಿಸಿಕೊಂಡು ತಟ್ಟನೆ ಏಳುವ
ಮೈರೋಮಕ್ಕಾಗಿ
ಕೃತಕ
ಕಾತರಿಸುತ್ತಲೇ ಇದ್ದೇನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೭
Next post ಮುಸ್ಸಂಜೆಯ ಮಿಂಚು – ೧೫

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys